ಶಿಡ್ಲಘಟ್ಟ: ಮೇಲ್ ಮರವತ್ತೂರ್ ಓಂಶಕ್ತಿ ದರ್ಶನಕ್ಕಾಗಿ ಉಚಿತ ಬಸ್ ವ್ಯವಸ್ಥೆ ಮಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಓಂ ಶಕ್ತಿ ಮಾಲಾಧಾರಿಗಳು (ಭಕ್ತಾದಿಗಳ) ವಿನಂತಿಯಂತೆ, ಅಮ್ಮ ಶಕ್ತಿಪೀಠ ಮೇಲ್ ಮರವತ್ತೂರ್ ಓಂಶಕ್ತಿ ದೇವಸ್ಥಾನದ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಉಚಿತ ಬಸ್ ಸೇವೆ ಒದಗಿಸಲು ಕೋರಿರುವ ಹಿನ್ನೆಲೆಯಲ್ಲಿ. ತಾಲೂಕಿನಾದ್ಯಂತ ಅವಶ್ಯಕತೆ ಇರುವಂತಹ ಬಡವರಿಗೆ ದೇವರ ದರ್ಶನ ಪಡೆಯಲು "ಲಕ್ಸುರಿ ಬಸ್" ವ್ಯವಸ್ಥೆ ಮಾಡಿ ಭಕ್ತಾದಿಗಳ ಓಂಶಕ್ತಿ ಅಮ್ಮನ ದರ್ಶನವನ್ನು ಪಡೆಯಲು ಅನುವು ಮಾಡಿಕೊಡುತ್ತಿರುವ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಕೋ-ಅರ್ಡಿನೇಟರ್ ರಾಜೀವ್ ಗೌಡರು ಭಾನುವಾರ ತಮಿಳುನಾಡಿನ ಮೇಲ್ ಮರವತ್ತೂರಿಗೆ ಹೋರಡಲು ನೂರಾರು ಓಂ ಶಕ್ತಿ ಮಾಲದಾರಿಗಳಿಗೆ ಶಿಡ್ಲಘಟ್ಟ ನಗರದಿಂದ ನೂರಾರು ಭಕ್ತಾದಿಗಳಿಗೆ ಹತ್ತಾರು ಬಸ್ ಗಳನ್ನು ವ್ಯವಸ್ಥೆ ಮಾಡಿ ನಗರದ ಶ್ರೀ ಪೂಜಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಸುಗಮ ಪ್ರಯಾಣ ಮಾಡಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಭಕ್ತಾದಿಗಳು ಅಮ್ಮನ ಕಿರು ದರ್ಶನವನ್ನು ಪಡೆದು ಧನ್ಯತೆ ಅನುಭವಿಸಲು ಶುಭಾಶಯಗಳನ್ನು ತಿಳಿಸಿದರು. ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮಿಳುನಾಡಿನ ಮೇಲ್ ಮರುವತ್ತೂರಿಗೆ ಪ್ರಯಾಣ ಮಾಡಿ ತಾಯಿ ಓಂ ಶಕ್ತಿಯ ದರ್ಶನವನ್ನು ಪಡೆಯಲು ಸಜ್ಜ...