ಮೇಣದ ಬತ್ತಿ ಹಿಡಿದು ಮತದಾನ ಕುರಿತು ಜಾಗೃತಿ
ಶಿಡ್ಲಘಟ್ಟ::ನಗರದ ತಾಲ್ಲೂಕು ಪಂಚಾಯಿತಿ ಮುಂಭಾಗದಿಂದ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರದಂದು ನಗರದ ಮುಖ್ಯರಸ್ತೆಯ ಮೂಲಕ ಕೋಟೆ ಸರ್ಕಲ್ ಬಳಿಯವರೆಗೆ ಮೆಣದ ಬತ್ತಿ ಹಿಡಿಯುವ ಮೂಲಕ ಮತದಾನದ ಅರಿವು ಮೂಡಿಸುವ ಜೊತೆಗೆ ನಾವು ಖಚಿತವಾಗಿ ಮತದಾನ ಮಾಡುತ್ತೇವೆ ಎಂದು ಘೋಷವಾಕ್ಯದೊಂದಿಗೆ ಅರಿವು ಮೂಡಿಸಿದರು.
ನಂತರ ನಗರದ ಕೋಟೆ ಸರ್ಕಲ್ ಬಳಿ ಮಾನವ ಸರಪಳಿ ಮಾಡಿ ಮತದಾನ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜ ಅವರು, ತಹಶೀಲ್ದಾರ್ ಸ್ವಾಮಿ, ನಗರಸಭೆ ಕಮಿಷನರ್, ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಯವರು ಮತ್ತು ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.
Comments
Post a Comment