ಕರ್ನಾಟಕ ಬಂದ್ ಕಾವೇರಿ ನೀರು - ನಮ್ಮ ಹಕ್ಕು ನಮ್ಮ ಅಸ್ತಿತ್ವ ಪೂರ್ವ ಭಾವಿ ಸಭೆ ಶಿಡ್ಲಘಟ್ಟ
ಶಿಡ್ಲಘಟ್ಟ ದಿನಾಂಕ 29-09-2023 ರಂದು ಕರ್ನಾಟಕ ಬಂದ್ ಮಾಡಲು ರಾಜ್ಯಾದ್ಯಂತ ಕನ್ನಡ ಸಂಘಟನೆಗಳ ಒಕ್ಕೂಟ ತೀರ್ಮಾನ ಮಾಡಿದೆ ಇದರ ಭಾಗವಾಗಿ ಕನ್ನಡಿಗರಾದ ನಾವು ಈ ಬಂದ್ ಮಾಡಬೇಕಾ? ಬೇಡವಾ! ಎಂದು ಚರ್ಚೆ ಮಾಡಬೇಕಿದೆ...
ಕನ್ನಡ,ನಾಡು,ನುಡಿ,ನೆಲ ಜಲ,ಭಾಷೆ,ಅಂತ ಬಂದಾಗ ಕೈ ಕಟ್ಟಿ ಕೂತಾಗ ಅನ್ಯ ರಾಜ್ಯದವರು ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಾರೆ ಆದ್ದರಿಂದ ದಯವಿಟ್ಟು ನಾಳೆ ಅಂದರೆ ಮಂಗಳವಾರ ದಿನಾಂಕ 26-09-2023 ರಂದು ಶಿಡ್ಲಘಟ್ಟ ನಗರದ ಶ್ರೀ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಎಲ್ಲಾ ಕನ್ನಡ ಪರ,ರೈತ ಪರ, ಕಾರ್ಮಿಕ,ಪ್ರಗತಿಪರ,ದಲಿತ ಸಂಘಟನೆಗಳು ಮತ್ತು ಆಟೋ ಚಾಲಕರು ಮತ್ತು ವಿದ್ಯಾರ್ಥಿಗಳು ಹಾಗೂ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪೂರ್ವ ಭಾವಿ ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಯಪಡಿಸಬೇಕಾಗಿ ತಮ್ಮಲ್ಲಿ ಮನವಿ.
*ಬಂದ್ ನಂತರ ಮನವಿ ಪತ್ರವನ್ನು ತಹಶೀಲ್ದಾರ್ ರವರಿಗೆ ನೀಡುವುದು*
*ನಮ್ಮ ಹಕ್ಕೊತಾಯಗಳು*
ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ಕರ್ನಾಟಕದಿಂದ ಒಂದು ಹನಿ ಸಹ ತಮಿಳು ನಾಡಿಗೆ ಬಿಡುವುದಿಲ್ಲ ಈ ಪ್ರತಿಯನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಮೋದಿ ರವರಿಗೆ ತಹಶಿಲ್ದಾರ್ ಮುಖಾಂತರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ನೀಡುವುದು.
ಸ್ಥಳ-ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ
ಸಮಯ -12 ಘಂಟೆಗೆ ಮದ್ಯಾಹ್ನ
*ಪ್ರಕಟನೆ: ಕನ್ನಡ ಸಂಘಟನೆಗಳ ಒಕ್ಕೂಟ ಶಿಡ್ಲಘಟ್ಟ*
ಈ ಸುದ್ದಿಯನ್ನು ಹೆಚ್ಚು ಜನಕ್ಕೆ ತಲುಪಿಸಲು ಗೌರವಾನ್ವಿತ ನಮ್ಮ ಕನ್ನಡದ ಸುದ್ದಿ ಮಾಧ್ಯಮದವರ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿಶೇಷವಾಗಿ ಆಹ್ವಾನ
🙏🙏🙏 *ಧನ್ಯವಾದಗಳು* 🙏🙏🙏
Comments
Post a Comment